ಶ್ರೀ ಲಕ್ಷ್ಮೀವಾಸುದೇವಾಯ ಎಂಟರ್ಪ್ರೈಸಸ್ ಲಾಂಛನದಲ್ಲಿ ಎಸ್.ಚಂದ್ರು ನಿರ್ಮಿಸಿ ನಿರ್ದೇಶಿಸಿದ ಅನಂತನ ಚಲ್ಲಾಟ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಈ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಛಾಯಾಗ್ರಹಣ - ಹೆಚ್.ಬಿ. ಹಳಿಕಟ್ಟಿ, ಸಂಗೀತ - ಎಂ.ಎಸ್. ಮೀರಜ್ಕರ್, ಸಂಕಲನ - ಸಿ.ರವಿಚಂದ್ರನ್, ಕಲೆ- ಸ್ವಾಮಿ-ಸುನಿಲ್, ನೃತ್ಯ - ಅಕುಲ್, ಮಂಜು, ಸಹನಿರ್ದೇಶನ - ಸಂತು, ನಿರ್ವಹಣೆ - ದಿನೇಶ್, ಲವ್ ಹಾಗು ಸೆಂಟಿಮೆಂಟ್ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ೫ ಹಾಡುಗಳಿದ್ದು, ಚಿತ್ರೀಕರಣವನ್ನು ಬೆಂಗಳೂರು, ಮೇಲುಕೋಟೆಯಲ್ಲಿ ನಡೆದಿದೆ. ತಾರಾಗಣದಲ್ಲಿ - ಸುಶೀಲ್ ಮೊಕಾಶಿ, ಮಮತಾ ರಾವುದ್, ಬುಲೆಟ್ ಪ್ರಕಾಶ್, ಶಂಕರ್ ಭಟ್, ಗಣೇಶ್ ರಾವ್, ಸುರೇಶ್ ಹೆಗ್ಡೆ, ರತ್ನಮಾಲ, ಶೋಭಾ ಮೈಸೂರು, ಪುಟಾಣಿ ಪಂಟ್ರು ಮಧು, ಸುಜಾತ, ಅನಿಲ್, ಗುರುಮೂರ್ತಿ, ಭಾಗ್ಯಶ್ರೀ ಮುಂತಾದವರಿದ್ದಾರೆ.